ಒಗಟ ಬಿಡಿಸಿರೇ

ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ
ಅಂದು, ಅಂತೆಯೇ ಮಾರಿದನೊಬ್ಬ
ತನ್ನ ಸತಿಯ ನಡುಬೀದಿಯಲಿ
ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು
ಬಿಕರಿಗಿಟ್ಟ ವಸ್ತುವಿನಂತೆ
ಕೊಟ್ಟಮಾತ ಉಳಿಸಿಕೊಳ್ಳಲು
ಸತ್ಯದ ಕೀರ್ತಿಗಾಗಿ
ಸತಿಯ ಮಾರಿ, ತನ್ನ ತಾ
ಮಾರಿಕೊಂಡ ಹುಂಬ ಗಂಡ
ಇವನಿಗಿಂತ ಕಡೆಯಾದನೊಬ್ಬ
ಪಣಕ್ಕಿಟ್ಟ ತನ್ನ ಸತಿಯ
ಲತ್ತೆಯಾಟದಲಿ ಸೋತು
ಪರರಿಗೊಪ್ಪಿಸಿದ ಧನದಂತೆ
ಗೆದ್ದವರು ಪೌರುಷದಲಿ
ಗೆದ್ದೆವೆಂಬ ಹಮ್ಮಿನಲಿ
ಕಣ್ಣೆದುರೇ ಸತಿಯ ಎಳೆದಾಡಿ
ಸೊಂಟಕ್ಕೆ ಕೈ ಇಕ್ಕಿದರೂ
ಬಗ್ಗಿಸಿದ ತಲೆ ಎತ್ತಲಾರದೆ
ಷಂಡರಾದರು ಗಂಡಂದಿರೈವರು
ನಡುದಾರಿಯಲಿ ಕೈಕೊಟ್ಟು
ಸತಿ ಉಟ್ಟ ಅರ್ಧ ಸೀರೆ ಹರಿದುಟ್ಟು
ನಿರ್ಧಯನಾಗಿ ಹೊರಟೆ ಬಿಟ್ಟ
ಕಗ್ಗಾಡಿನಲಿ ನಿದ್ರೆ ಹೋದ
ಅರ್ಧಾಂಗಿನಿಯ ಬಿಟ್ಟು!
ಅಲ್ಪನ ಮಾತಿಗೆ
ಕಲ್ಪನೆಯ ತಾವಿಗೆ
ಫಲಹೊತ್ತ ಮಡದಿಯ
ಕಾಡಟ್ಟಿ ಜನಮೆಚ್ಚಿದ
ದೊರೆಯಾದ ಅಗ್ನಿಗೆ
ತಳ್ಳಿದ್ದ ದೊರೆಯೊಬ್ಬ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಷಿತಿಜದೆಡೆಗೆ
Next post ಕೇರಳದ ಹುಡುಗಿಯರು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys